ಉಪ್ಪಿನಂಗಡಿ: ಕಳವು ಯತ್ನ ; ಆರೋಪಿ ಸೆರೆ

Update: 2020-02-25 17:13 GMT

ಉಪ್ಪಿನಂಗಡಿ: ಉಪ್ಪಿನಂಗಡಿಯ ಹೃದಯಭಾಗದಲ್ಲಿನ ಮನೆಯೊಂದಕ್ಕೆ ಕಳವು ನಡೆಸಲು ಆರೋಪಿಯೋರ್ವ ಹಂಚು ತೆಗೆದು ಒಳನುಗ್ಗಿ ಅಲ್ಲೇ ನಿದ್ದೆ ಮಾಡಿ ಬೆಳಗ್ಗೆ ಮನೆಯ ಯಜಮಾನನ ಕೈಗೆ ಸಿಕ್ಕಿಬಿದ್ದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಉದ್ಯಮಿ ಸುದರ್ಶನ್‍ರವರ ಮನೆಯಲ್ಲಿ ಈ ಕಳ್ಳತನದ ಯತ್ನ  ನಡೆದಿದೆ.

ಸುಮಾರು 24 ಅಡಿ ಎತ್ತರದ ಮಾಳಿಗೆ ಮನೆಯ ಛಾವಣಿಯನ್ನೇರಿ ಅಲ್ಲಿಂದ ಛಾವಣಿಯ ಹಂಚುಗಳನ್ನು ತೆಗೆದು ನೆಲ ಮಹಡಿಗೆ ಬಂದಾತ ನಡು ಕೋಣೆಯಲ್ಲಿನ ಟಿವಿ ಸ್ಟ್ಯಾಂಡ್ ನ್ನು ಜಾಲಾಡಿಸಿ ಮನೆಯಲ್ಲಿನ ಬೀಗದ ಕೀ ಗೊಂಚಲನ್ನು ತೆಗೆದುಕೊಂಡಿದ್ದಾನೆ. ಬಳಿಕ ನಡುಕೋಣೆಗೆ ಹೋಗಿ ಅಲ್ಲಿದ್ದ ದಿವಾನದಲ್ಲಿ ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಆರು ಗಂಟೆಯ ಸುಮಾರಿಗೆ ಮನೆಯ ಯಜಮಾನನ ಬೆತ್ತದೇಟಿಗೆ ಈತ ಎಚ್ಚರಗೊಂಡಿದ್ದು, ಬಳಿಕ ಈತನನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News