ಶಿರ್ತಾಡಿ: ದಾರುಸ್ಸಲಾಮ್ ಮದರಸ ಉದ್ಘಾಟನೆ

Update: 2020-02-25 17:34 GMT

ಮೂಡುಬಿದಿರೆ : ಮಂಗಳೂರಿನ ಸೈದಾಲಿ ಸಾರಾ ಅಬ್ಬಾಸ್ ಫೌಂಡೇಶನ್ ವತಿಯಿಂದ ಶಿರ್ತಾಡಿ ಸಮೀಪದ ಮಕ್ಕಿಗೆ ಕೊಡಲ್ಪಟ್ಟ ದಾರುಸ್ಸಲಮ್ ಮದರಸದ ಉದ್ಘಾಟನೆ ಇತ್ತೀಚೆಗೆ ಜರುಗಿತು.

ಅಬ್ಬಾಸ್ ಟಿಂಬರ್ಸ್ ಮಾಲಕ ಮುಹಮ್ಮದಾಲಿ ಅಬ್ಬಾಸ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾಜೂರಿನ ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಹಾಗೂ ದುವಾ ನಡೆಯಿತು.

ವಾಲ್ಪಾಡಿ ಮಸೀದಿ ಕಮಿಟಿಯ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಜಿ.ಮುಹಮ್ಮದ್ ಹನೀಫ್ ಹಾಜಿ, ವಾಲ್ಪಾಡಿ ಮಸೀದಿ ಖತೀಬರಾದ ಅಲ್ತಾಫ್ ಹುಸೈನ್ ದಾರಿಮಿ, ಮಕ್ಕಿ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಮದನಿ, ಸದರ್‍ಮುಅಲ್ಲಿಮ್ ಅಬ್ದುಲ್ ರಶೀದ್ ಹನೀಫಿ, ಇಸ್ಮಾಯಿಲ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್, ಅಬೂಬಕ್ಕರ್ ಸಿದ್ಧೀಕ್ ಫೈಝಿ, ಉಮರ್ ಮುಸ್ಲಿಯಾರ್ ಕನ್ನಡಿಕಟ್ಟೆ, ಹೆಚ್.ಮುಹಮ್ಮದ್ ವೇಣೂರು, ಮುಹಮ್ಮದ್ ದೋಣಿಬಾಗಿಲು, ಅಬೂಬಕ್ಕರ್ ಇಸ್ಮಾಯಿಲ್, ಸಲೀಮ್, ರಝಾಕ್ ಬಿ.ಕೆ., ಜಕರಿಯಾ ಯೂಸುಫ್, ಉಬೈದುಲ್ಲಾ ಮಕ್ಕಿ ಮತ್ತಿತರರು ಉಪಸ್ಥಿತರಿದ್ದರು.

ಮುಹಮ್ಮದಾಲಿ ಮಕ್ಕಿ ಸ್ವಾಗತಿಸಿ, ವಂದಿಸಿದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News