ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮಂಚಿ ಪಿಡಿಒಗೆ ಎಸ್.ಡಿ.ಪಿ.ಐ. ಮನವಿ

Update: 2020-02-27 16:20 GMT

ಬಂಟ್ವಾಳ, ಫೆ.27: ಗ್ರಾಮದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಎಸ್.ಡಿ.ಪಿ.ಐ. ಮಂಚಿ ಗ್ರಾಮ ಸಮಿತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಗ್ರಾಮ ಪಂಚಾಯತ್ ನ ವಾಣಿಜ್ಯ ಕಟ್ಟಡಗಳ ಬಾಡಿಗೆ ದರ ಪರಿಷ್ಕರಣೆ, ಹಳೆ ಕಟ್ಟಡಗಳ ದುರಸ್ತಿ, ಮಂಚಿ ಕಟ್ಟೆ, ಕುಕ್ಕಾಜೆ ಜಂಕ್ಷನ್ ನಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಕುಕ್ಕಾಜೆ ಮತ್ತು ಮಂಚಿ ಕಟ್ಟೆ ಜಂಕ್ಷನ್ ನಲ್ಲಿರುವ ಹೈ ಮಾಸ್ಕ್ ದೀಪ ಹಾಗೂ ಗ್ರಾಮದ ವಿವಿಧ ಪ್ರದೇಶದ ಬೀದಿದೀಪಗಳ ದುರಸ್ತಿ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. 

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಮಂಚಿ ವಲಯ ಸಮಿತಿ ಅಧ್ಯಕ್ಷ ನವಾಝ್ ಕೋಡಿಬೈಲ್, ಕಾರ್ಯದರ್ಶಿ ಫಾರೂಕ್ ಮಂಚಿ, ಕಾರ್ಯಕರ್ತರಾದ ಅಬ್ದುಲ್ಲಾ ನಾಡಾಜೆ, ಝಿಯಾಝ್, ಶರೀಫ್ ಕುಕ್ಕಾಜೆ, ನಿಸಾರ್ ಕುಕ್ಕಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News