ಗಾಂಜಾ ಸೇವನೆ: ನಾಲ್ವರು ವಶಕ್ಕೆ

Update: 2020-02-27 17:29 GMT

ಮಣಿಪಾಲ, ಫೆ.27: ಗಾಂಜಾ ಸೇವನೆಗೆ ಸಂಬಂಧಿಸಿ ಫೆ.12ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಣವ್ ವಿರ್ಮನಿ (21) ಮತ್ತು ಸುಶೋವಿತ್ ರಜ್ದಾನ್ (20) ಹಾಗೂ ಫೆ.16ರಂದು ವಿದ್ಯಾರತ್ನನಗರ ಎಂಬಲ್ಲಿ ಅನಿರುದ್ ಸೇಶಾದ್ರಿ (21) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲ್ಪೆ: ಮಲ್ಪೆ ಬಂದರು ಬಳಿ ಫೆ. 26ರಂದು ಗಾಂಜಾ ಸೇವನೆಗೆ ಸಂಬಂಧಿಸಿ ವಡಬಾಂಡೇಶ್ವರ ನೇರ್ಗಿ ನಿವಾಸಿ ತ್ಯಾಗರಾಜ್(27) ಎಂಬಾತನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News