ಮಾ. 1: ದಾರುಲ್ ಇರ್ಶಾದ್ 30 ನೇ ವಾರ್ಷಿಕ, 3ನೇ ಸನದುದಾನ ಮಹಾ ಸಮ್ಮೇಳನ

Update: 2020-02-28 17:12 GMT

ಪುತ್ತೂರು: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಮಾಣಿ ಇದರ ಮೂವತ್ತನೇ ವಾರ್ಷಿಕ ಹಾಗೂ ಮೂರನೇ ಸನದುದಾನ ಸಮ್ಮೇಳನ ಮಾರ್ಚ್ 1 ರ ಸಂಜೆ ನಾಲ್ಕು ಗಂಟೆಗೆ ಕೆ.ಜಿ.ಎನ್ ಕ್ಯಾಂಪಸ್‍ನಲ್ಲಿ ನಡೆಯಲಿದೆ.

ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು  ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿರುವ ಲಿಯಾವುಲ್ ಮುಸ್ತಫಾ ಹಾಮಿದ್ ಕೋಯಮ್ಮ ತಂಙಳ್ ಮಾಟೂಲ್ ಪದವಿ ಪ್ರದಾನ ಮಾಡಲಿದ್ದು ಮೌಲನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಸಮಾರೊಪ ಭಾಷಣ ಮಾಡಲಿದ್ದಾರೆ. ತಾಜುಶ್ಶರೀಅ ಶೈಖುನಾ ಆಲಿ ಕುಂಞಿ ಉಸ್ತಾದ್,ಸಯ್ಯಿದ್ ಸ್ವಲಾಹುದ್ದೀನ್ ತಂಙಳ್, ಇಬ್ರಾಹಿಂ ಫೈಝಿ ಕನ್ಯಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಡೈರೆಕ್ಟರ್ ಶರೀಫ್ ಸಖಾಫಿ ಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News