ಬಾಲಕಿಯ ಅತ್ಯಾಚಾರ ಪ್ರಕರಣ: ಕೇರಳದ ಪಾದ್ರಿಯ ಉಚ್ಛಾಟನೆಗೈದ ಪೋಪ್ ಫ್ರಾನ್ಸಿಸ್

Update: 2020-03-01 14:14 GMT

ಕೊಚ್ಚಿ:ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ನ್ಯಾಯಾಲಯವು ಘೋಷಿಸಿರುವ ಕೇರಳದ ಮಾನಂತವಾಡಿ ಡಯಾಸಿಸ್‌ನ ಸೈರೊ ಮಲಬಾರ್ ಚರ್ಚ್‌ನ ಧರ್ಮಗುರು ರಾಬಿನ್ ವಡಕ್ಕಂಚೇರಿ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಹುದ್ದೆಯಿಂದ ಉಚ್ಚಾಟಿಸಿ ಆದೇಶಿಸಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾನಂತವಾಡಿ ಡಯಾಸಿಸ್ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದಕ್ಕಾಗಿ ತಲಶ್ಶೇರಿಯ ಪೊಕ್ಸೊ ನ್ಯಾಯಾಲಯವು ಕಳೆದ ವರ್ಷ 20 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಮೂರು ಲಕ್ಷ ರೂ.ದಂಡವನ್ನು ವಿಧಿಸಿತ್ತು.

2017ರ ಆರಂಭದಲ್ಲಿ ವಡಕ್ಕಂಚೇರಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಾಗಲೇ ಧರ್ಮಗುರು ಹುದ್ದೆಯಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News