ವಳಚ್ಚಿಲ್: ರಕ್ತದಾನ ಶಿಬಿರ
Update: 2020-03-02 12:32 GMT
ವಳಚ್ಚಿಲ್, ಮಾ.2: ಅರ್ಕುಳ ವಳಚ್ಚಿಲ್ ಜುಮಾ ಮಸೀದಿ ಮತ್ತು ತನ್ವೀರುಲ್ ಇಸ್ಲಾಂ ಮದ್ರಸ ಹಾಗೂ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ವಳಚ್ಚಿಲ್ ತನ್ವೀರುಲ್ ಇಸ್ಲಾಮ್ ಮದ್ರಸದಲ್ಲಿ ನಡೆಯಿತು.
ಮದ್ರಸದ ಅಧ್ಯಕ್ಷ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಉದ್ಘಾಟಿಸಿದರು.
ವೇದಿಕೆಯಲ್ಲಿ ಯಾಸೀನ್ ಆತಲೆ, ಸಮೀರ್ ಶಾನ್, ಖುಬೃದ್, ಅಬ್ಬಾಸ್, ಅನ್ವರ್ ತಬೂಕ್, ನಝೀರ್, ನಝೀರ್ ತೋಟ, ಮುಸ್ತಫ, ರಝಾಕ್ ರಿಕ್ಷಾ ಪಾರ್ಕ್, ಮನ್ಸೂರ್, ಸಮದ್, ಆಸಿಫ್, ಶರೀಫ್, ಕಮಾಲುದ್ದೀನ್ ಕೊಲಂಬೆ, ಪುತ್ತುಬಾವ ಆತಲೆ, ಫೈಝಲ್ ವಿ.ಎಚ್.,ಯಾಕೂಬ್ ಫೈರೋಝ್ ಮತ್ತಿತರರು ಉಪಸ್ಥಿತರಿದ್ದರು.