ಪುತ್ತೂರು: ಭರತನಾಟ್ಯದಲ್ಲಿ ಅನನ್ಯಾಗೆ ದ್ವಿತೀಯ ಬಹುಮಾನ
Update: 2020-03-05 13:50 GMT
ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಕೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎನ್.ಆರ್.ಅನನ್ಯಾ ರೈ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾದ ಅನನ್ಯಾ ರೈ ಅವರು ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು ರಾಧಾಕೃಷ್ಣ ರೈ ಮತ್ತು ಲತಾ ರಾಧಾಕೃಷ್ಣ ರೈ ದಂಪತಿ ಪುತ್ರಿ, ವಿದುಷಿ ಜ್ಯೋತಿ ಪುರುಷೋತ್ತಮ ಹಾಗೂ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ.