ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ
Update: 2020-03-06 22:30 IST
ಮಣಿಪಾಲ, ಮಾ.6: ವಾಟ್ಸಾಪ್ನಲ್ಲಿ ಮಿಸ್ ಯೂ ಆಲ್ ಎಂಬ ಸ್ಟೇಟಸ್ ಹಾಕಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ವಿಶ್ವೇಶ್ವರನಗರ ಎಂಬಲ್ಲಿ ಮಾ.5ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ವಿಶ್ವೇಶರನಗರ ನಿವಾಸಿ ನಾರಾಯಣ ಆಚಾರ್ಯ ಎಂಬವರ ಮಗ ಸಂತೋಷ್(25) ಎಂದು ಗುರುತಿಸಲಾಗಿದೆ.
ತನ್ನ ಮೊಬೈಲ್ನಲ್ಲಿ ಸ್ಟೇಟಸ್ ಹಾಕಿಕೊಂಡ ಸಂತೋಷ್, ಬಳಿಕ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.