×
Ad

ಮಾ. 9ರಂದು ಉಚ್ಚಿಲದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಜನಜಾಗೃತಿ ಸಭೆ

Update: 2020-03-07 22:22 IST

ಪಡುಬಿದ್ರಿ: ಪ್ರಜಾಪ್ರಭುತ್ವ ವಿರೋಧಿ  ಮತ್ತು ಅಸಾಂವಿಧಾನಿಕವಾದ ಪೌರತ್ವ ಕಾಯ್ದೆಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಜನಜಾಗೃತಿ ಸಭೆಯು ಮಾ. 9ರಂದು ಬೆಳಿಗ್ಗೆ 10ಗಂಟೆಗೆ  ಉಚ್ಚಿಲ ತುಂಬೆ ಕರ್ಕೇರ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಪೌರತ್ವ ಕಾಯ್ದೆಯಿಂದ ಜನರ ಮೇಲಾಗುವ ದುಷ್ಪರಿಣಾಮಗಳು, ದಿನಬಳಕೆ ವಸ್ತುಗಳ ಗಗನಕ್ಕೇರಿದ ಬೆಲೆಯೇರಿಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಲು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಯವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಚಿಂತಕ ಭಾಸ್ಕರ್ ಪ್ರಸಾದ್, ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಜನ ಜಾಗೃತಿ ಮೂಡಿಸಲಿಕ್ಕಿದ್ದಾರೆ ಕಾಪು ಬ್ಲಾಕ್ ಅಧ್ಯಕ್ಷ ನವೀನ್‍ ಚಂದ್ರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News