×
Ad

ಅಂದರ್ ಬಾಹರ್: ಎಂಟು ಮಂದಿ ಬಂಧನ

Update: 2020-03-09 22:22 IST

ಉಡುಪಿ, ಮಾ.9: ನಗರದ ಸಿಟಿ ಬಸ್ ನಿಲ್ದಾಣ ಸದಾನಂದ ಟವರ್ ಬಳಿ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಕಾರ್ನಾಡಿನ ಸಂತೋಷ ಕುಮಾರ್ (28), ಬಳ್ಳಾರಿಯ ನಾಗರಾಜ್ (30), ಕೊಪ್ಪಳದ ತಿಮ್ಮಣ್ಣ ಪೂಜಾರಿ(51), ರಮೇಶ ವಿರಾಪುರ (30), ಬಾಗಲಕೋಟೆಯ ಪ್ರವೀಣ ಕುಮಾರ್ ಶರಣಪ್ಪಗೌಡ ಮೇಟಿ(22), ಹಣಮಂತ(55), ಶಿವಮೊಗ್ಗದ ಮಲ್ಲಪ್ಪ(36), ಹಾವೇರಿಯ ಶಿವಾನಂದ ಬಸವಣ್ಣಪ್ಪ ಸಣ್ಣಹುಲಿ(49) ಬಂಧಿತ ಆರೋಪಿಗಳು. ಇವರಿಂದ 2,860ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News