ಶತಾಯುಷಿ ಭಾಗವತ ಎಳ್ಳಾರೆ ವೆಂಕಟ್ರಾಯ ನಾಯಕ್ ನಿಧನ

Update: 2020-03-10 14:57 GMT

ಮುನಿಯಾಲು, ಮಾ.10: ಎಳ್ಳಾರೆ ಭಾಗವತರೆಂದೇ ಖ್ಯಾತರಾದ ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಕೆಂಜರಜಡ್ಡು ವೆಂಕಟ್ರಾಯ ನಾಯಕ್ (102) ರವಿವಾರ ನಿಧನರಾದರು.

ಯಕ್ಷಗಾನ ಭಾಗವತರಾಗಿ ಖ್ಯಾತರಾಗಿದ್ದ ಇವರು ಹಲವು ಮಂದಿ ಶಿಷ್ಯರನ್ನು ಬೆಳೆಸಿದ್ದಾರೆ. ಇತ್ತೀಚೆಗಷ್ಟೆ ಶತಾಬ್ಧಿ ಸಂಭ್ರಮವನ್ನು ಪುತ್ರರು ಆಚರಿಸಿದ್ದರು. ಮೃತರು ಭಾಗವತ ಎಳ್ಳಾರೆ ಶಂಕರ ನಾಯಕ್ ಸೇರಿದಂತೆ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News