ಶಬರಿಮಲೆಗೆ ಬರಬೇಡಿ: ಯಾತ್ರಾರ್ಥಿಗಳಿಗೆ ದೇವಸ್ವಂ ಬೋರ್ಡ್ ಮನವಿ

Update: 2020-03-10 15:23 GMT
ಫೈಲ್ ಚಿತ್ರ

ತಿರುವನಂತಪುರ,ಮಾ.10: ಕೊರೋನ ವೈರಾಣು ಸೋಂಕು ಹರಡುತ್ತಿರುವುದರಿಂದ ಶಬರಿಮಲೆ ದೇವಾಲಯಕ್ಕೆ ಬರಬೇಡಿ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಯಾತ್ರಾರ್ಥಿಗಳಲ್ಲಿ ಸೋಮವಾರ ಮನವಿ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಎನ್. ವಾಸು, ತಿಂಗಳ ಪೂಜೆಗಾಗಿ ಬಾಗಿಲು ತೆರೆಯಲಿರುವ ಶಬರಿಮಲೆ ದೇವಾಲಯಕ್ಕೆ ಆಗಮಿಸಬೇಡಿ. ಒಂದು ವೇಳೆ ಈ ಬಗ್ಗೆ ತಿಳಿಯದೆ ಯಾರಾದರೂ ಆಗಮಿಸಿದರೆ, ಅವರನ್ನು ದೇವಾಲಯಕ್ಕೆ ತೆರಳುವುದನ್ನು ತಡೆಯುವುದೇ ಎಂಬ ಬಗ್ಗೆ ನಾವು ನಿರ್ಧರಿಸಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News