ಕೇರಳದಲ್ಲಿ ಕೊರೋನ ವೈರಸ್ ನಿಗಾ ವಾರ್ಡ್‌ಗೆ ದಾಖಲಾಗಿದ್ದ ವ್ಯಕ್ತಿ ಸಾವು

Update: 2020-03-13 15:30 GMT
File Photo (PTI)

ತಿರುವನಂತಪುರ, ಮಾ. 14: ಕೊಟ್ಟಾಯಂ ಆಸ್ಪತ್ರೆಯ ಕೊರೋನ ನಿಗಾ ವಾರ್ಡ್‌ನಲ್ಲಿ ದಾಖಲಾಗಿದ್ದ ಓರ್ವ ಮೃತಪಟ್ಟಿದ್ದಾನೆ ಎಂದು ಕೇರಳ ಸರಕಾರದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

72 ವರ್ಷದ ಈ ವ್ಯಕ್ತಿ ನೆತ್ತರು ನಂಜಾಗಿ ಮೃತಪಟ್ಟಿದ್ದಾರೆ. ಅವರಿಗೆ ಕೊರೋನ ವೈರಾಣು ಸೋಂಕು ಆಗಿರಲಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಕೊಟ್ಟಾಯಂನಲ್ಲಿ ಕೆಲವು ಕೊರೋನ ವೈರಾಣು ಸೋಂಕಿತರ ಸಂಪರ್ಕ ಹೊಂದಿದ ಇವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿಗಾ ಘಟಕದಲ್ಲಿ ಇರಿಸಲಾಗಿತ್ತು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಶೀಜಾ ಹೇಳಿದ್ದಾರೆ.

ಕೇರಳದಲ್ಲಿ ಇದುವರೆಗೆ 17 ಮಂದಿಗೆ ಸೋಂಕು ತಗಲಿದೆ. ರಾಜ್ಯ ಸರಕಾರದ ಅಧಿಕಾರಿಗಳು ಕೊರೋನ ವೈರಸ್‌ನ ಆರಂಭಿಕ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News