ದಾರುನ್ನೂರು: ಕೊರೋನಾ ವೈರಸ್ ಬಗ್ಗೆ ಮಾಹಿತಿ ಶಿಬಿರ

Update: 2020-03-15 16:18 GMT

ಕಾಶಿಪಟ್ಣ, ಮಾ.15: ದಾರುನ್ನೂರ್ ವಿದ್ಯಾಸಂಸ್ಥೆಯಲ್ಲಿ ಕೊರೋನಾ ವೈರಸ್ ಬಗ್ಗೆ ಪ್ರಸ್ತುತ ಸನ್ನಿವೇಶದಲ್ಲಿ ನಡೆಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾರಾವಿ ಸರಕಾರಿ ವೈದ್ಯಾಧಿಕಾರಿ ಡಾ.ದೀಕ್ಷಿತಾ ಕೆ. ಹಾಗೂ ವಿಜಯಾ ಅವರು ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಹಿತಿಗಳನ್ನು ನೀಡಿದರು.

ಈ ಸಂದರ್ಭ ಪ್ರಾಂಶುಪಾಲ ಅಮೀನ್ ಹುದವಿ, ಮುಖ್ಯ ಶಿಕ್ಷಕ ಹುಸೈನ್ ರಹ್ಮಾನಿ, ಉಪ ಪ್ರಾಂಶುಪಾಲ ತ್ವಾಹ ಹುದವಿ, ಪ್ರಾಧ್ಯಾಪಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಸ್ಲಂ ಸ್ವಾಗತಿಸಿದರು. ಶಿಕ್ಷಕ ಇಸಾಕ್ ವಂದಿಸಿದರು.

ರಜೆ ಘೋಷಣೆ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ನೀಡಿದ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸುವ ಸಲುವಾಗಿ ದಾರುನ್ನೂರ್ ವಿದ್ಯಾರ್ಥಿಗಳಿಗೆ ಮಾ.15ರಿಂದ ಮುಂದಿನ ಸೂಚನೆಯವರೆಗೆ ರಜೆಯನ್ನು ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News