ಗಾಂಜಾ ಸೇವನೆ: ಮೂವರು ವಶಕ್ಕೆ

Update: 2020-03-17 15:58 GMT

ಮಣಿಪಾಲ, ಮಾ.17: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾ.3ರಂದು ಮಣಿಪಾಲದ ನಕ್ಷತ್ರ ಆಪಾರ್ಟ್ಮೆಂಟ್ ಬಳಿ ಅಮ್ಮುಂಜೆ ಗ್ರಾಮದ ಸಾಲ್ಮರ ನಿವಾಸಿ ರಾಕೇಶ್(22), ಮಾ.10ರಂದು 80 ಬಡಗುಬೆಟ್ಟು ಗ್ರಾಮದ ರಾಜೀವನಗರ ಬಳಿ ಸ್ಥಳೀಯ ನಿವಾಸಿ ಹರಿದಾಸ್ ಪೂಜಾರಿ(37), ಮಾ.5ರಂದು ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಂಐಟಿ ವಿದ್ಯಾರ್ಥಿ ರೋಹಿತ್ ರಾಮ್(24) ಎಂಬವರನ್ನು ವಶಕ್ಕೆ ಪಡೆದು ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು ವರದಿಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢ ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News