ಸಾಬ್ರಕಟ್ಟೆ ವಾರದ ಸಂತೆ ರದ್ದು
Update: 2020-03-20 20:25 IST
ಉಡುಪಿ, ಮಾ.20: ಕರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 144(3) ಸೆಕ್ಷನ್ ಕಾಯ್ದೆ ಜಾರಿಯಲ್ಲಿರುವುದರಿಂದ, ಶಿರಿಯಾರ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶದಂತೆ ಸರಕಾರದ ಮುಂದಿನ ಆದೇಶ ಬರುವವರೆಗೆ ಸಾಬ್ರಕಟ್ಟೆಯ ಮಂಗಳವಾರದ ವಾರದ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ಶಿರಿಯಾರ ಗ್ರಾಪಂನ ಪ್ರಕಟಣೆ ತಿಳಿಸಿದೆ.