ಕೊರೊನಾ ವೈರಸ್ ಹಿನ್ನೆಲೆ: ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆ ಸೇರ್ಪಡೆ

Update: 2020-03-21 16:23 GMT

ಉಡುಪಿ, ಮಾ.21: ಕೊರೋನ ವೈರಾಣು ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್- 19 ರೆಗ್ಯೂಲೇಷನ್ಸ್-2020ರ ನಿಯಮ 12ರಲ್ಲಿ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಕಾಯ್ದೆ-2005 ಕಲಂ 24(ಎ), (ಬಿ), 30(2) ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಿ, ಇವುಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸ್ಥಗಿತಗೊಂಡ ಹೊಸ ಸೇವೆಗಳು: ಪಹಣಿ ವಿತರಣಾ ಸೇವೆ, ಸ್ಪಂದನಾ ಕೇಂದ್ರಗಳ ಸೇವೆ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬೆಳಗಿನ ಕಚೇರಿಯ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಅಪರಾಹ್ನದ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಪ್ರತಿ ದಸ್ತಾವೇಜಿನ ನೊಂದಣಿ ಬಗ್ಗೆ 15 ನಿಮಿಷಗಳ ಅಂತರವಿರಿಸಿ ಸಮಯ ನಮೂದಿಸಿ ಟೋಕನ್‌ಗಳನ್ನು ವಿತರಿಸಿ, ದಾಸ್ತಾವೇಜುಗಳ ನೊಂದಣಿಗೆ ಕ್ರಮ ವಹಿಸಬೇಕು.

ಪಹಣಿ ವಿತರಣಾ ಸೇವೆ, ಸ್ಪಂದನಾ ಕೇಂದ್ರಗಳ ಸೇವೆ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬೆಳಗಿನ ಕಚೇರಿಯ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಅಪರಾಹ್ನದ ಅವಧಿಯಲ್ಲಿ 10 ದಾಸ್ತಾವೇಜುಗಳನ್ನು, ಪ್ರತಿ ದಸ್ತಾವೇಜಿನ ನೊಂದಣಿ ಬಗ್ಗೆ 15 ನಿಮಿಷಗಳ ಅಂತರವಿರಿಸಿ ಸಮಯ ನಮೂದಿಸಿ ಟೋಕನ್‌ಗಳನ್ನು ವಿತರಿಸಿ, ದಾಸ್ತಾವೇಜು ಗಳ ನೊಂದಣಿಗೆ ಕ್ರಮ ವಹಿಸಬೇಕು. ಏಕಕಾಲದಲ್ಲಿ ಕಚೇರಿಗೆ ಹೆಚ್ಚು ಜನರ ಪ್ರವೇಶವನ್ನು ನಿರ್ಬಂಧಿಸಬೇಕು. ನೊಂದಣಿಗೆ ಬರುವವರಲ್ಲಿ ಯಾರಿಗಾದರೂ ಶೀತ, ನೆಗಡಿ ಮತ್ತು ಕೆಮ್ಮು ಇಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಸ್ಯಾನಿಟರ್ ಬಳಸಿ ಒಳ ಪ್ರವೇಶಿಸುವ ಬಗೆ್ಗ ಅಗತ್ಯ ವ್ಯವಸ್ಥೆ ಮಾಡಬೇಕು.

ಏಕಕಾಲದಲ್ಲಿ ಕಚೇರಿಗೆ ಹೆಚ್ಚು ಜನರ ಪ್ರವೇಶವನ್ನು ನಿರ್ಬಂಧಿಸಬೇಕು. ನೊಂದಣಿಗೆ ಬರುವವರಲ್ಲಿ ಯಾರಿಗಾದರೂ ಶೀತ, ನೆಗಡಿ ಮತ್ತು ಕೆಮ್ಮು ಇಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಸ್ಯಾನಿಟರ್ ಬಳಸಿ ಒಳ ಪ್ರವೇಶಿಸುವ ಬಗ್ಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಮೇಲಿನ ಎಲ್ಲಾ ಸೇವೆಗಳಲ್ಲಿ ಸರಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News