ಎಸ್ಕೆಎಸ್ಸೆಸ್ಸೆಫ್ ಖಿಲ್ರಿಯಾ ನಗರ : ಶುಚಿತ್ವ ಅಭಿಯಾನ ಕಾರ್ಯಕ್ರಮ

Update: 2020-03-24 17:11 GMT

ಬೆಂಗ್ರೆ : ಎಸ್ಕೆಎಸ್ಸೆಸ್ಸೆಫ್ ಖಿಲ್ರಿಯಾ ನಗರ ವತಿಯಿಂದ ಶುಚಿತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. 

ನಮ್ಮನ್ನು ನಾವು ಹೇಗೆ ವೈರಸ್ ಗಳಿಂದ ಸಂರಕ್ಷಿಸಬೇಕು ಎಂಬುದರ ಕುರಿತು ಸ್ಥಳೀಯ ಖತೀಬ್ ಶರೀಫ್ ದಾರಿಮಿ ಮಾಹಿತಿ ನೀಡಿದರು. 

ಶುಚಿತ್ವ ಇಸ್ಲಾಮಿನ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಕೊರೋನ ಹಾಗೂ ಇನ್ನಿತರ ರೋಗಗಳು ನಿಯಂತ್ರಿಸಲು ಮತ್ತು ನಮ್ಮನ್ನು ನಾವು ಸಂರಕ್ಷಿಸೋಣ ಎಂದು ನಾಸಿರ್ ಕೌಸರಿ ಮಾತನಾಡಿ ಹೇಳಿದರು.

ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್  ಖಿಲ್ರಿಯಾ ನಗರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News