ಪಡುಪಣಂಬೂರು : 'ಸಾಮಾಜಿಕ ಅಂತರ'ದಲ್ಲಿ ಪಡಿತರ ವಿತರಣೆ
Update: 2020-03-26 06:35 GMT
ಮಂಗಳೂರು, ಮಾ. 26: ಕೊರೋನ ವೈರಸ್ ಹಿನ್ನೆಲೆಯಲ್ಲಿ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕ್ ನ ನ್ಯಾಯ ಬೆಲೆ ಅಂಗಡಿಯಲ್ಲಿ ಸಾಮಾಜಿಕ ಅಂತರದಲ್ಲಿ ಪಡಿತರ ವಿತರಿಸಲಾಯಿತು.
ಭಾರತ ಲಾಕ್ ಡೌನ್ ಆಗಿದ್ದು, ಜಿಲ್ಲಾಡಳಿತ ಘೋಷಿಸಿರುವಂತೆ ಪ್ರತೀ ಗ್ರಾಹಕರ ಮಧ್ಯೆ ಒಂದು ಮೀಟರ್ ಅಂತರ ಕಾಯ್ದುಕೊಂಡು ಪಡಿತರ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ಒಂದು ಮೀಟರ್ ದೂರದಲ್ಲಿ ಸುಣ್ಣದ ಹುಡಿ ಬಳಸಿ ಚೌಕುಳಿ ಆಕಾರದ ರೇಖೆಗಳನ್ನು ಮಾಡಿ ಅದರಲ್ಲಿ ಸರತಿಸಾಲಿನ ಮೂಲಕ ಬರುವವರಿಗೆ ಮಾತ್ರ ಪಡಿತರ ನೀಡುವುದಾಗಿ ಕಟ್ಟು ನಿಟ್ಟಾಗಿ ಸೂಚಿಸಲಾಗಿತ್ತು. ಅದರಂತೆ ಸರದಿ ಸಾಲಿನಲ್ಲಿ ಬಂದವರಿಗಷ್ಟೇ ಪಡಿತರ ವಿತರಿಸಲಾಯಿತು.