ಶುಕ್ರವಾರ ಮನೆಯಲ್ಲೇ ನಮಾಝ್ ನಿರ್ವಹಿಸಿ: ಕೃಷ್ಣಾಪುರ ಖಾಝಿ ಇಕೆ ಇಬ್ರಾಹೀಂ ಮುಸ್ಲಿಯಾರ್ ಕರೆ

Update: 2020-03-26 14:43 GMT

ಮಂಗಳೂರು, ಮಾ. 26: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಂತೆ ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ವ್ಯಾಪ್ತಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಬದಲು ಎಲ್ಲರೂ ತಮ್ಮ ಮನೆಗಳಲ್ಲೇ ಳುಹರ್ ನಮಾಝ್ ಮಾಡುವಂತೆ ಕೃಷ್ಣಾಪುರ ಖಾಝಿ ಇಕೆ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಅದರಂತೆ ಬದ್ರಿಯಾ ಜುಮಾ ಮಸ್ಜಿದ್‌ನ ಸಂಯುಕ್ತ ಜಮಾಅತ್‌ನ ಅಧೀನದಲ್ಲಿರುವ ಕೇಂದ್ರ ಜುಮಾ ಮಸ್ಜಿದ್, ಬದ್ರುಲ್ ಹುದಾ ಜುಮಾ ಮಸ್ಜಿದ್, ಈದ್ಗಾ ಜುಮಾ ಮಸ್ಜಿದ್, ಮಸ್ಜಿದ್ ತ್ವೈಬಾ ಜುಮಾ ಮಸ್ಜಿದ್, ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್, ಮಸ್ಜಿದುಲ್ ಹುದಾ ಜುಮಾ ಮಸ್ಜಿದ್‌ಗಳ ವ್ಯಾಪ್ತಿಗೆ ಬರುವ ಸರ್ವ ಸದಸ್ಯರು ಖಾಝಿಯ ಸೂಚನೆಯನ್ನು ಪಾಲಿಸುವಂತೆ ಜಮಾಅತ್ ನ ಅಧ್ಯಕ್ಷ ಅಲ್ಹಾಜ್ ಬಿಎಂ ಮಮ್ತಾಝ್ ಅಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News