ಬೈಕ್‌ನಲ್ಲಿ ತಿರುಗಾಡಿದ ಯುವಕನಿಗೆ ‘ಬಸ್ಕಿ’ಯ ಶಿಕ್ಷೆ

Update: 2020-03-26 15:54 GMT

ಮಂಗಳೂರು, ಮಾ. 26: ಕೊರೋನ ರೋಗವನ್ನು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಆದೇಶ ನೀಡಿದ್ದರೂ ಕೂಡ ಅದನ್ನು ಉಲ್ಲಂಘಿಸುವ ಯುವಕರನ್ನು ಬಂಧಿಸಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಯುವಕರಿಗೆ ಇದೀಗ ಸಾರ್ವಜನಿಕವಾಗಿಯೇ ಪೊಲೀಸರು ಶಿಕ್ಷೆಯನ್ನು ವಿಧಿಸತೊಡಗಿದ್ದಾರೆ.

ಕಲ್ಬುರ್ಗಿಯಲ್ಲಿ ರಸ್ತೆಗೆ ಇಳಿದ ಯುವಕರನ್ನು ಹಿಡಿದು ಅವರ ಕೈಗೆ ಪೊರಕೆ ನೀಡಿ ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸುವ ಮೂಲಕ ಎಚ್ಚರಿಕೆ ನೀಡಿದರೆ, ಗುರುವಾರ ಮಧ್ಯಾಹ್ನ ತೊಕ್ಕೊಟ್ಟು ಸಮೀಪದ ಓವರ್ ಬ್ರಿಡ್ಜ್ ಬಳಿ ಬೈಕ್‌ನಲ್ಲಿ ತಿರುಗಾಡುತ್ತಿದ್ದ ಯುವಕನನ್ನು ಕೆಳಗೆ ಇಳಿಸಿದ ಉಳ್ಳಾಲ ಪೊಲೀಸರು ಸಾರ್ವಜನಿಕವಾಗಿಯೇ ‘ಬಸ್ಕಿ’ ತೆಗಿಸಿ ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ಮಾಡಿ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News