ಮಂಗಳೂರು : ಇಂದು ನಗರದಲ್ಲಿ ಜನ ಸಂಚಾರ ವಿರಳ

Update: 2020-03-29 04:11 GMT

ಮಂಗಳೂರು: ಮಂಗಳೂರು ನಗರ ಹಾಗು ತೊಕ್ಕೋಟ್ಟು ಪರಸರದಲ್ಲಿ ಹಾಲು ಹಾಗು ಸಣ್ಣಪುಟ್ಟ ಅಂಗಡಿಗಳು ಇಂದು ಬೆಳಗ್ಗೆ ತೆರೆದಿದ್ದು, ಜನ ಸಂಚಾರ, ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಿತ್ತು. 

ಮಂಗಳೂರಿನ ಜಪ್ಪುಮಾರ್ಕೆಟ್ ಹಾಗು ಪರಿಸರದಲ್ಲಿ ಹಾಲಿನಂಗಡಿ ಹಾಗು ಹಣ್ಣಿನ ಅಂಗಡಿಗಳು ತೆರೆದಿದ್ದು ಮುಂಜಾನೆ ವ್ಯಾಪಾರ ನಡೆಸಿದರು. ಪಾಂಡೇಶ್ವರ ಪರಿಸರದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆದಿದ್ದು, ಸಾರ್ವಜನಿಕರು ಮುಗಿ ಬಿದ್ದು ಖರೀದಿಸುವುದು ಕಂಡಿತು.

ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಸಮಾರು 7.30 ರವರಗೆ ಸಗಟು ವ್ಯಾಪಾರಸ್ಥರಿಗೆ ಸಮಯ ನೀಡಿದ್ದು ತದನಂತರ ಪೊಲೀಸರು ಎಚ್ಚರಿಕೆ ನೀಡಿ ಅಂಗಡಿಮುಗಟ್ಟುಗಳನ್ನು ಮುಚ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News