ಕ್ವಾರಂಟೈನ್ ಉಲ್ಲಂಘನೆ ಆರೋಪ: ಕಲ್ಲೇರಿಯ ಕೊರೋನ ಸೋಂಕಿತನ ವಿರುದ್ಧ ಪ್ರಕರಣ ದಾಖಲು
Update: 2020-03-30 11:29 GMT
ಉಪ್ಪಿನಂಗಡಿ, ಮಾ.30: ಕೊರೋನ ಸೋಂಕು ದೃಢಗೊಂಡ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಯುವಕನ ವಿರುದ್ಧ ಕ್ವಾರಂಟೈನ್ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಈತನ ವಿರುದ್ದ ದೂರು ದಾಖಲಿಸಿದ್ದಾರೆ.
ಮಾರ್ಚ್ 21 ರಂದು ದುಬೈನಿಂದ ಬೆಂಗಳೂರು ಮೂಲಕ ಊರಿಗೆ ಆಗಮಿಸಿದ ಈತ ನಂತರದಲ್ಲಿ 14 ದಿನಗಳು ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದ್ದರೂ ಅದನ್ನು ಉಲ್ಲಂಘಿಸಿದ್ದಾನೆ. ಈ ಕಾರಣದಿಂದ ಈತನ ಮತ್ತು ಈತನ ಮನೆಯವರ ವಿರುದ್ಧ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.