ಐಕಳದ ದಂಪತಿಯಿಂದ ಮನಪಾಕ್ಕೆ 500 ಕೆಜಿ ಅಕ್ಕಿ ಕೊಡುಗೆ

Update: 2020-03-30 11:31 GMT

ಕೊರೋನ ಲಾಕ್ಡೌನ್ ಹಿನ್ನೆಲೆ
ಮಂಗಳೂರು, ಮಾ.30: ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಉದ್ದೇಶದಿಂದ ಐಕಳದ ದಂಪತಿಯೊಂದು ಮಂಗಳೂರು ಮಹಾನಗರ ಪಾಲಿಕೆಗೆ 500 ಕೆಜಿ ಅಕ್ಕಿ ದೇಣಿಗೆ ನೀಡಿದೆ.

ಬೆಂಗಳೂರಿನ ಲೆನೊವೊ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಹೇಮಚಂದ್ರ ಕಾವೂರು ಹಾಗೂ ಎಂಎಂಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪತ್ನಿ ಉಮಾ ಹೇಮಚಂದ್ರ ಈ ಅಕ್ಕಿ ಕೊಡುಗೆ ನೀಡಿದ ದಂಪತಿ.

ಮೂಲತಃ ಕಿನ್ನಿಗೋಳಿ ಐಕಳದವರಾಗಿರುವ ಹೇಮಚಂದ್ರ ಕಳೆದ ತಿಂಗಳು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಇಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ನೆರವಾಗುವ ಉದ್ದೇಶದಿಂದ ಈ ಕೊಡುಗೆ ನೀಡಿದ್ದು, ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಇದನ್ನು ಸ್ವೀಕರಿಸಿದರು.

ಈ ಸಂದರ್ಭ ಮನಪಾ ಆಯುಕ್ತ ಅಜಿತ್ಕುಮಾರ್ ಹೆಗಡೆ, ಮಾಜಿ ಮೇಯರ್‌ಗಳಾದ ಭಾಸ್ಕರ್, ಶಶಿಧರ್ ಹೆಗ್ಡೆ, ಪರಿಸರ ಇಂಜಿನಿಯರ್ ಮಧು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News