ಕಣಚೂರು ಆಸ್ಪತ್ರೆ, ಸಂಶೋಧನಾ ಕೇಂದ್ರ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ

Update: 2020-03-31 08:55 GMT

ಮಂಗಳೂರು : ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ಅಧೀನದಲ್ಲಿರುವ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಬಿಸಲಾಗಿದೆ.

ಈ ಸೌಲಭ್ಯವು ಕೊರೋನ ವೈರಸ್‍ನಿಂದ ದೇಶದಾದ್ಯಂತ ಘೋಷಿಸಲಾದ ಲಾಕ್‍ಡೌನ್‍ನ ತರ್ತು ಪರಿಸ್ಥಿತಿಯಲಿ, ಕಣಚೂರು ಆಸ್ಪತ್ರೆಯಲ್ಲಿ ಐಸಿಯು ದಾಖಲಾತಿ ಹೊಂದುವವರಿಗೆ, ಹೆರಿಗೆ ಹಾಗೂ ಪ್ರಸೂತಿ, ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವವರಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕಷ್ಟ ದಲ್ಲಿರುವ ರೋಗಿಗಳು ಒಳರೋಗಿಗಳಾಗಿ ದಾಖಲಾತಿ ಹೊಂದುವವರಿಗೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಆ್ಯಂಬುಲೆನ್ಸ್ ಸೇವೆಗಾಗಿ ಕರೆ ಮಾಡಬೇಕಾದ ಸಂಖ್ಯೆ : 9448859080, 9663224133, 9632381427, 9164150377, ಉಳ್ಳಾಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವವರು ಕರೆ ಮಾಡಬೇಕಾದ ಸಂಖ್ಯೆ  (ಸಮದ್) 7339900113.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News