ಬೀದಿಗೆ ಬಂದ್ರೆ ನೀನು...ನಿನ್ನ ಮನೆಗೆ ಬರುವೆ ನಾನು!

Update: 2020-03-31 14:38 GMT

ಕುಂದಾಪುರ, ಮಾ.31: ಲಾಕ್‌ಡೌನ್ ಮಧ್ಯೆ ಹಲವು ಮಂದಿ ವಿನಾಕಾರಣ ಮನೆಯಿಂದ ಹೊರಗೆ ರಸ್ತೆಗೆ ಬರುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ವಿವಿಧ ಮಾರ್ಗ ಗಳನ್ನು ಅನುಸರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಮಾವಿನಕಟ್ಟೆ ಸರ್ಕಲ್ ಬಳಿಯ ರಸ್ತೆಯಲ್ಲಿ ‘ಬೀದಿಗೆ ಬಂದ್ರೆ ನೀನು...ನಿನ್ನ ಮನೆಗೆ ಬರುವೆ ನಾನು’ ಎಂಬ ಬರಹವನ್ನು ಬರೆದು, ಜನರಲ್ಲಿ ಕೊರೋನಾ ಜಾಗೃತಿ ಮೂಡಿಸಿ ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ರಾಜಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಈ ಜನಜಾಗೃತಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಇದಕ್ಕೆ ಸ್ಥಳೀಯ ನಾಗರಿಕರು ಸಹಕಾರ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News