ಎಪ್ರಿಲ್ 14ರವರೆಗೆ ಮಸೀದಿಗಳಲ್ಲಿ ನಮಾಝ್‌ಗೆ ನಿರ್ಬಂಧ

Update: 2020-03-31 17:32 GMT

ಮಂಗಳೂರು, ಮಾ.31: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಮಾ.31ರವರೆಗೆ ನಮಾಝ್‌ಗೆ ವಿಧಿಸಲಾದ ನಿರ್ಬಂಧವನ್ನು ಎಪ್ರಿಲ್ 14ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾವುದ್ದೀನ್ ಜೆ. ಗದ್ಯಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ನಿರ್ದೇಶನದಂತೆ ಶುಕ್ರವಾರದ ಜುಮ್ಮಾ ನಮಾಝ್ ಸಹಿತ ದಿನದ 5 ಬಾರಿಯ ನಮಾಝ್‌ಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಪ್ರಿಲ್ 14ರವರೆಗೆ ನಮಾಝ್‌ಗೆ ನಿರ್ಬಂಧ ಹೇರಲಾಗಿದೆ. ಇದನ್ನು ತಪ್ಪದೆ ಎಲ್ಲಾ ಮಸೀದಿಗಳ ಆಡಳಿತ ಸಮಿತಿಯು ಪಾಲಿಸಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News