ಸುರತ್ಕಲ್: ಹೊರ ರಾಜ್ಯದ ಸಾವಿರ ಕಾರ್ಮಿಕರಿಗೆ ಕಿಟ್ ವಿತರಣೆ

Update: 2020-04-01 14:54 GMT

ಮಂಗಳೂರು, ಎ.1: ಸುರತ್ಕಲ್, ಕಾನ, ಕಾಟಿಪಳ್ಳ, ಗಣೇಶಪುರದಲ್ಲಿ ವಾಸಿಸುತ್ತಿರುವ ಜಾರ್ಖಂಡ್ ಮೂಲದ 1 ಸಾವಿರ ಕಾರ್ಮಿಕರಿಗೆ ದ.ಕ. ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯು ಪ್ರತೀ ಕಾರ್ಮಿಕರಿಗೆ 5 ಕೆಜಿ ಅಕ್ಕಿ ಮತ್ತು ದವಸ ಧಾನ್ಯಗಳ ಪೊಟ್ಟಣವನ್ನು ವಿತರಿಸಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೊಂದರೆಗೀಡಾದ ಜನರ ಸಂಖ್ಯೆ, ಮನೆ ಇಲ್ಲದವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಇತರ ದುರ್ಬಲರನ್ನು ಗುರುತಿಸಿ ಊಟ, ವಸತಿಯನ್ನು ಮತ್ತು ಆಹಾರ ಧಾನ್ಯಗಳನ್ನು ನೀಡುವ ಬಗ್ಗೆಯೂ ಜಿಲ್ಲಾಡಳಿತ ಕ್ರಮ ವಹಿಸಿದೆ. ಈಗಾಗಲೆ 895 ಮಂದಿಯನ್ನು ಗುರುತಿಸಿ ನಗರ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಲಸೆ ಕಾರ್ಮಿಕರು 1077 ಸಹಾಯವಾಣಿಗೆ ಕರೆ ಮಾಡಿ ಮನವಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News