ಅಧಿಕಾರಿಗೆ ಭಡ್ತಿಯೊಂದಿಗೆ ವರ್ಗಾವಣೆ

Update: 2020-04-01 16:02 GMT

ಮಂಗಳೂರು, ಎ.1: ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಕೆ.ಎನ್. ಮುಹಮ್ಮದ್ ಹನೀಫ್ ಅವರಿಗೆ ಕಾರ್ಯಪಾಲಕ ಅಭಿಯಂತರರಾಗಿ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪದೋನ್ನತಿ ಹೊಂದಿದ ಹನೀಫ್‌ರನ್ನು ಮಂಗಳೂರು ಬಂದರು ಇಲಾಖೆಯ ಯೋಜನಾ ನಿರ್ವಹಣಾ ಘಟಕದಲ್ಲಿ ಉಪನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದ್ದು, ಎ.1ರಂದು ಅಧಿಕಾರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News