ಉಡುಪಿ: 'ಕೊರೋನ ಸೈನಿಕ'ರಿಂದ ಕಾಲನಿಗಳಿಗೆ ಭೇಟಿ

Update: 2020-04-02 15:20 GMT

ಉಡುಪಿ: ಜಿಲ್ಲೆಯ 55 ಮಂದಿ ಕೊರೋನ ಸೈನಿಕರು ಗುರುವಾರ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಅಸಂಘಟಿತ ಕಾರ್ಮಿಕರ ಕಾಲನಿಗಳಿಗೆ ಭೇಟಿ ನೀಡಿ ವಿವಿಧ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿದರು.

ಉಡುಪಿಯ ಬೋರ್ಡ್ ಶಾಲೆಯಲ್ಲಿರುವ ಕಾಲನಿ, ಹಾರಾಡಿ ಗಾಂಧಿನಗರ ಕಾಲನಿ, ಬೈಕಾಡಿ ಕಾಲನಿ ಹಾಗೂ ಬಾರಕೂರು ಕಾಲೇಜಿನಲ್ಲಿರುವ ಕಾಲನಿಗಳಿಗೆ ಭೇಟಿ ನೀಡಿದ ಈ ಪ್ರತಿನಿಧಿಗಳು ಸುಮಾರು 1400 ಮಾಸ್ಕ್, ಸ್ಯಾನಟೈಸರ್, ಸೋಪು ಹಾಗೂ ಕರಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹಾಗೂ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News