ಬ್ರಹ್ಮಾವರ: ನೀರಿನಲ್ಲಿ ಮುಳುಗಿ ಬಾಲಕ ಸಾವು

Update: 2020-04-02 16:39 GMT

ಬ್ರಹ್ಮಾವರ, ಎ.2: ಮದಗಕ್ಕೆ ಸ್ನಾನಕ್ಕೆಂದು ತೆರಳಿದ ಬಾಲಕನೊಬ್ಬ ಅಕಸ್ಮಿಕ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಅಪರಾಹ್ನ ಚಾಂತಾರು ಗ್ರಾಮದಿಂದ ವರದಿಯಾಗಿದೆ. ಚಂದ್ರಶೇಖರ ಎಂಬವರ ಮಗ ನಿಶಾಂತ (12) ಮೃತ ಬಾಲಕ.

ಈತ ಇಂದು 11:00 ಗಂಟೆ ಸುಮಾರಿಗೆ ಚಾಂತಾರು ಮದಗಕ್ಕೆ ಸ್ನಾನಕ್ಕೆಂದು ತೆರಳಿದ್ದು, ಅಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದವನನ್ನು ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News