ಪಡಿತರ ಅಂಗಡಿಗೆ ಶಾಸಕ ಖಾದರ್ ಭೇಟಿ

Update: 2020-04-02 17:44 GMT

ಉಳ್ಳಾಲ, ಎ.2: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗುರುವಾರದಿಂದ ಪಡಿತರ ವಿತರಣೆ ಆರಂಭವಾಗಿದೆ. ಅದರಂತೆ ಶಾಸಕ ಯು.ಟಿ.ಖಾದರ್ ಕ್ಷೇತ್ರದಾದ್ಯಂತ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಮಧ್ಯೆ ತಲಪಾಡಿಯ ನ್ಯಾಯಬೆಲೆ ಅಂಗಡಿಯಲ್ಲಿ ಬೆಳ್ತಿಗೆ ಅಕ್ಕಿ ನೀಡಿದ್ದಕ್ಕೆ ಪಡಿತರ ಚೀಟಿದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಖಾದರ್, ಸ್ಥಳಕ್ಕೆ ಭೇಟಿ ನೀಡಿ ಅಂಗಡಿಯನ್ನು ಮುಚ್ಚಿಸಿದರು. ಅಲ್ಲದೆ ನೂಕುನುಗ್ಗಲು ಮಾಡದೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News