ಆಶಾ ಕಾರ್ಯಕರ್ತೆಗೆ ಹಲ್ಲೆ: ಶಾಸಕ ಯು.ಟಿ.ಖಾದರ್ ಖಂಡನೆ

Update: 2020-04-02 17:46 GMT

ಮಂಗಳೂರು, ಎ.2: ಬೆಂಗಳೂರಿನ ಸಾದಿಕ್ ನಗರದಲ್ಲಿ ಕೊರೋನ ತಪಾಸಣೆ ಕಾರ್ಯದಲ್ಲಿ ನಿರತರಾದ ಆಶಾ ಕಾರ್ಯಕರ್ತೆಯ ಮೇಲೆ ನಡೆದ ಹಲ್ಲೆಗೆ ಶಾಸಕ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.

ಕೊರೋನ ಜಾತಿ, ಮತ, ದೇಶ, ಗಡಿ, ಭಾಷೆ, ಶ್ರೀಮಂತ, ಬಡವ, ಶಿಕ್ಷಿತರು, ಅಶಿಕ್ಷಿತರು ಎಂಬುದನ್ನು ನೋಡದೆ ಎಲ್ಲರಲ್ಲೂ ಹರಡುವ ಅಪಯಾಕಾರಿ ಸೋಂಕು. ಇದನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ವೈರಸ್ ಎಲ್ಲಿಂದ ಮತ್ತು ಹೇಗೆ ಬಂತು ಎಂದು ಪರಸ್ಪರ ಕಿತ್ತಾಡುವ ಬದಲು ಎಲ್ಲರೂ ನಿಯಮ ಪಾಲಿಸಿದರೆ ಇದರ ನಿರ್ಮೂಲನೆ ಮಾಡಲು ಸಾಧ್ಯ. ತಪಾಸಣೆಗೆ ಬರುವ ಎಲ್ಲಾ ವೈದ್ಯರು, ನರ್ಸ್ ಹಾಗೂ ಆಶಾಕಾರ್ಯಕರ್ತೆಯರಿಗೆ ಸಹಕಾರ ನೀಡಲೇಬೇಕು ಎಂದು ಯು.ಟಿ.ಖಾದರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News