ಬ್ರಹ್ಮಾವರ: ಮಾಸ್ಕ್, ಸ್ಯಾನಿಟೈಸರ್, ಓಅರ್‌ಎಸ್ ವಿತರಣೆ

Update: 2020-04-03 13:41 GMT

ಬ್ರಹ್ಮಾವರ, ಎ.3: ಸ್ಥಳೀಯ ಸುವರ್ಣ ಎಂಟರ್‌ಪ್ರೈಸಸ್‌ನ ವತಿಯಿಂದ ಬ್ರಹ್ಮಾವರ ಪೊಲೀಸ್ ಠಾಣೆ ಹಾಗೂ ವಾರಂಬಳ್ಳಿ ಗ್ರಾಮಪಂಚಾಯತ್‌ನ ಸಿಬ್ಬಂದಿಗಳಿಗೆ ಉಚಿತವಾಗಿ ಮಾಸ್ಕ್ ,ಸ್ಯಾನಿಟೈಸರ್ ಮತ್ತು ಓಆರ್‌ಎಸ್‌ನ್ನು ವಿತರಿಸಲಾಯಿತು.

ಪೊಲೀಸ್ ಸಿಬ್ಬಂದಿಗಳ ಪರವಾಗಿ ಠಾಣಾಧಿಕಾರಿ ಸಿ.ರಾಘವೇಂದ್ರ ಮತ್ತು ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರ ನಾಯಕ್ ಅವರು ವಸ್ತುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾರಕವಾದ ಕೊರೋನಾ ವೈರಸ್ ಕುರಿತಂತೆ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ರಾಘವೇಂದ್ರ ಅವರು ವಿವರಿಸಿದರು.

ಸುವರ್ಣ ಎಂಟರ್‌ಪ್ರೈಸಸ್‌ನ ಮಾಲಕಿ ಸುನೀತಾ ಮಧುಸೂಧನ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಓಅರ್‌ಎಸ್‌ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿಯ ಮುಖ್ಯಸ್ಥ ಸುಂದರ್ ಪೂಜಾರಿ ಮೂಡುಕುಕ್ಕುಡೆ, ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ,ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ನಿತ್ಯಾನಂದ ವಾರಂಬಳ್ಳಿ, ನಿರ್ದೇಶಕ ವಿವೇಕಾನಂದ್ ಕಾಮತ್ ಹಾಗೂ ಮಧುಸೂಧನ್ ಹೇರೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News