ಬ್ರಹ್ಮಾವರ: ನೀರಿನಲ್ಲಿ ಮುಳುಗಿ ಇಬ್ಬರು ಮೃತ್ಯು

Update: 2020-04-03 16:10 GMT

ಬ್ರಹ್ಮಾವರ, ಎ.3:ಚಾಂತಾರು ಗ್ರಾಮದ ಚಾಂತಾರು ಮದಗಕ್ಕೆ ಸ್ನಾನಕ್ಕೆಂದು ತೆರಳಿದ ಮಹಾಬಲ ನಾಯ್ಕ್ ರ ಪುತ್ರ ಮಹೇಶ್ (21) ಹಾಗೂ ಚಂದ್ರಶೇಖರ ಎಂಬವರ ಮಗ ನಿಶಾಂತ್ (12) ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಅಪರಾಹ್ನ 1:30ರ ಸುಮಾರಿಗೆ ನಡೆದಿದೆ. ಇವರಿಬ್ಬರು ಸ್ನಾನಕ್ಕೆಂದು 11 ಗಂಟೆಗೆ ಮದಗಕ್ಕೆ ತೆರಳಿದ್ದರು.

ಮುಳುಗಿದವರನ್ನು ಸಾರ್ವಜನಿಕರು ನೀರಿನ ಆಳದಿಂದ ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News