​'ಟೀಂ ಬಿ ಹ್ಯೂಮನ್' ಮತ್ತು 'ಎನ್‌ಎಂಸಿ' ವತಿಯಿಂದ ಮುಂದುವರಿದ ಆಹಾರ ಪೂರೈಕೆ

Update: 2020-04-03 17:04 GMT

ಮಂಗಳೂರು, ಎ.3: ಕೊರೋನ ಭೀತಿಯಿಂದ ತತ್ತರಿಸಿರುವ ಜನತೆಯ ಹಸಿವು ನೀಗಿಸುವ ಸಲುವಾಗಿ ಟೀಂ ಬಿ ಹ್ಯೂಮನ್ ಮತ್ತು ಎನ್‌ಎಂಸಿ ಮೈದಾನ ವತಿಯಿಂದ ನೀಡುವ ಆಹಾರ ಪೂರೈಕೆಯು ಶುಕ್ರವಾರವೂ ಮುಂದುವರಿದಿದೆ.

ಮಾ.22ರಿಂದ ಆರಂಭಗೊಂಡ ಈ ಸೇವೆಯು ಈವರೆಗೆ ಮುಂದುವರಿದಿದ್ದು, ಪ್ರತಿ ನಿತ್ಯ ಉತ್ತಮ ಗುಣಮಟ್ಟದ ಆಹಾರ ತಯಾರಿಸಿ ದಿನಕ್ಕೆ 3 ಬಾರಿ ನಗರದಾದ್ಯಂತ ಬಡವರಿಗೆ ನೀಡುತ್ತಿದ್ದಾರೆ. ಬೀದಿಬದಿ ನಿವಾಸಿಗಳು, ಕೂಲಿ ಕಾರ್ಮಿಕರು, ಜೊತೆಗೆ ಮನೆ ಮತ್ತು ಫ್ಲಾಟ್‌ಗಳಲ್ಲಿ ಸಿಕ್ಕಿ ಹಾಕಿಕೊಂಡ ತಮಿಳುನಾಡು, ಕೇರಳ, ಮುಂಬೈನ ಜನತೆಗೆ ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಆಹಾರ ನೀಡುತ್ತಿದೆ.
ವ್ಯಾಪಕ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಟೀ ಬಿಸ್ಕಿತ್ ನೀಡುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿರುವ ಜನರಿಗೂ ಸೇವೆಯನ್ನು ವಿಸ್ತರಿಸಿದೆ. ಅದಕ್ಕಾಗಿ ನೂರಾರು ಕಾರ್ಯಕರ್ತರು ದಿನವಿಡೀ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಟೀಂ ಬಿ ಹ್ಯೂಮನ್‌ನ ಮುಖ್ಯಸ್ಥ ಆಸೀಫ್ ಡೀಲ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News