ಭಟ್ಕಳ ಮಸೀದಿಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಣೆ
Update: 2020-04-05 21:21 IST
ಭಟ್ಕಳ: ಜಿಲ್ಲಾಡಳಿತದ ಆದೇಶದ ಅನ್ವಯ ಪುರಸಭೆ ಪೌರಕಾರ್ಮಿಕರು ತಾಲೂಕಿನ ಪ್ರಮುಖ ಏಳು ಮಸೀದಿಗಳಿಗೆ ಸೋಡಿಯಂ ಹೈಫೊ ಕ್ಲೋರೈಡ್ ರಾಸಾಯನಿಕ ಮಿಶ್ರಿತ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಯಿತು.
ಜನರ ರಕ್ಷಣೆಗೆ ಪೌರಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ತಾಲೂಕಿನ ಪ್ರಮುಖ ಮಸೀದಿಗಳಾದ ಚಿನ್ನದ ಪಳ್ಳಿ, ಸಿದ್ದಿಕ್ ಸ್ಟ್ರೀಟ್, ಖಲಿಫಾ ಜಾಮಿಯಪಳ್ಳಿ ಸೇರಿದಂತೆ ತಾಲೂಕಿನ ಏಳು ಮಸೀದಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.
ಎಲ್ಲಾ ಮಸೀದಿಗಳ ಮುಖ್ಯಸ್ಥರ ಪರವಾನಗಿ ಪಡೆದು ಸಿಂಪಡಣೆ ಕಾರ್ಯವನ್ನು ಪೌರಕಾರ್ಮಿಕರಾದ ನಾಗರಾಜ್ ಹಾಗೂ ರವಿ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.