ಬಂಟ್ವಾಳ ಎಸ್ಕೆಎಸ್ಸೆಸ್ಸೆಫ್ ನಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

Update: 2020-04-06 09:49 GMT

ಬಂಟ್ವಳ, ಎ.6: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಾಗುವಂತೆ ಸಮಸ್ತ ಮುಶಾವರದ ನಾಯಕರು ನೀಡಿರುವ  ಕರೆಯಂತೆ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ನಿಂದ ಎಲ್ಲಾ ಜಾತಿ, ಧರ್ಮದ ಸುಮಾರು 410 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು. 

ಹಿರಿಯ ಮುತ್ಸದ್ದಿ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್ ಹಾಜಿ ಅವರು ಕಿಟ್ ಸಾಗಾಟದ ವಾಹನಕ್ಕೆ ಚಾಲನೆ ನೀಡಿದರು. ಬಂಟ್ವಾಳ ಕೆಳಗಿನಪೇಟೆ ಖತೀಬ್ ಉಸ್ಮಾನ್ ದಾರಿಮಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಿಟ್ ವಿತರಣೆಗೆ ಸಹಕರಿಸಿದ ಎಲ್ಲ ದಾನಿಗಳ ಸ್ಮರಿಸಲಾಯಿತು. 

ಯುನಿಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್, ಸಮಿತಿ ಸದಸ್ಯರಾದ ಹೈದರ್ ಅಲಿ, ರಫೀಕ್ ಬಿ.ಕೆ., ಖಾದರ್ ಮಾಸ್ಟರ್, ಮುಹಮ್ಮದ್ ಬಿ.ಎ., ಸವಾಝ್, ಝುಹೂರ್, ಸತ್ತಾರ್, ರುಮಾನ್ ಮುಸ್ತಫಾ, ಎಂ.ಕೆ ನಾಸಿರ್, ಬಶೀರ್, ಬಿಲಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News