ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಶಾಖೆಯಿಂದ ಆಹಾರ ಕಿಟ್ ವಿತರಣೆ

Update: 2020-04-06 06:56 GMT

ಬಂಟ್ವಾಳ, ಎ.6: ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿರುವ ಬಡ ಜನತೆಯ ಸಹಾಯಕ್ಕೆ ನಿಲ್ಲುವಂತೆ ಸಮಸ್ತ ಮುಶಾವರ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಯುನಿಟ್ ವತಿಯಿಂದ ಎಲ್ಲ ಜಾತಿ ಧರ್ಮದ ಸುಮಾರು 250 ಕುಟುಂಬಗಳಿಗೆ ಅಹಾರ ಕಿಟ್ ಗಳನ್ನು ವಿತರಿಸಲಾಯಿತು.

ನೆಲ್ಲಿಗುಡ್ಡೆ ಜುಮಾ ಮಸೀದಿಯ ಖತೀಬ್ ರಫೀಕ್ ಅಹ್ಸನಿ ದುಆಗೈದು ವಿತರಣೆಗೆ ಚಾಲನೆ ನೀಡಿದರು. ದೂಮಲಿಕೆ ಜುಮಾ ಮಸೀದಿ ಖತೀಬ್  ಆದಂ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಎಚ್.ಇ.ಹನೀಫ್ ದೂಮಲಿಕೆ, ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಶಾಖೆ ಅಧ್ಯಕ್ಷ ಅಬುಸಾಲಿ ಎನ್.ಸಿ.ರೋಡ್, ಇಕ್ಬಾಲ್ ದೂಮಲಿಕೆ, ದ.ಕ. ಜಿಲ್ಲಾ ಕೌನ್ಸಿಲರ್ ಶರೀಫ್ ದೂಮಲಿಕೆ, ಬಿಸ್ಮಿಲ್ಲಾ ಜುಮಾ ಮಸೀದಿಯ ಉಪಾಧ್ಯಕ್ಷ ಹುಸೈನಾರ್ ಎನ್.ಸಿ.ರೋಡ್  ಹಾಗೂ ಎಸ್ಕೆಎಸ್ಸೆಸ್ಸೆಫ್ ದೂಮಲಿಕೆ ಶಾಖಾ ಸದಸ್ಯರು, ವಿಖಾಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News