ಭಟ್ಕಳ: ಕ್ವಾರೆಂಟೈನ್ ಉಲ್ಲಂಘನೆ ಆರೋಪ ; ದೂರು ದಾಖಲು

Update: 2020-04-06 11:51 GMT

ಭಟ್ಕಳ : ಕೊರೋನ ಕ್ವಾರೆಂಟೈನ್ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಫಾರೂಕಿ ಸ್ಟ್ರೀಟ್ ನ ನಿವಾಸಿ ಸಂಶುದ್ದೀನ್ (36) ಎಂಬವರ ವಿರುದ್ಧ ಕ್ವಾರಂಟೈನ್ ಉಲ್ಲಂಘಿಸಿದ ಆರೋಪದಲ್ಲಿ ದೂರು ದಾಖಲಾಗಿದೆ.

ಈತ ಮಾ. 17ರಂದು ದುಬೈ ನಿಂದ ಭಟ್ಕಳಕ್ಕೆ ಬಂದಿದ್ದು, ಎ.3 ರಂದು ಈತ ಹೊಟ್ಟೆ ನೋವು ಎಂದು ಹೇಳಿಕೊಂಡು ಭಟ್ಕಳ ಸರಕಾರಿ ಆಸ್ಪತ್ರೆಗೆ ಹೋಗಿದ್ದು, ವಿದೇಶದಿಂದ ಬಂದ ಕಾರಣಕ್ಕಾಗಿ ಹೋಂ ಕ್ವಾರೆಂಟೈನ್ ಗೆ ಸೂಚಿಸಿ ವೈದ್ಯಾಧಿಕಾರಿಗಳು ಮುದ್ರೆ ಹಾಕಿದ್ದರು. ಆದರೆ ಈತ ಕ್ವಾರೆಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ಎಂದು ಆರೋಪಿಸಿ ಭಟ್ಕಳ ಆರೋಗ್ಯಾಧಿಕಾರಿ ಡಾ. ಮೂರ್ತಿ ಭಟ್ ಪೊಲೀಸ್ ರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News