ಲಾಕ್ಡೌನ್ ಅವಧಿ ಮುಗಿಯುವವರೆಗೆ ಸಹಕರಿಸಿ: ದ.ಕ. ಜಿಲ್ಲಾಧಿಕಾರಿ
Update: 2020-04-06 15:46 GMT
ಮಂಗಳೂರು, ಎ. 6: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಧಿಸಿದ ಲಾಕ್ಡೌನ್ ಅವಧಿಯು ದ.ಕ.ಜಿಲ್ಲೆಯಲ್ಲೂ ಎ.14ರವರೆಗೆ ಇರಲಿದ್ದು, ಈ ಸಂದರ್ಭ ಜಿಲ್ಲೆಯ ಸರ್ವರೂ ಕೂಡ ಎಂದಿನಂತೆ ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಕರೆ ನೀಡಿದ್ದಾರೆ.
ಈಗಾಗಲೆ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಅದನ್ನೆಲ್ಲಾ ಪಾಲಿಸುವ ಮೂಲಕ ತಾವು ಸಹಕರಿಸಿದ್ದೀರಿ. ಮುಂದೆಯೂ ಸಹಕರಿಸಿ ಎಂದು ಕರೆ ನೀಡಿದ ಜಿಲ್ಲಾಧಿಕಾರಿ, ಕೊರೋನ ಸೋಂಕಿತರ ಪೈಕಿ ನಾಲ್ಕು ಮಂದಿ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರ ಸೇವೆಗೈದ ವೈದ್ಯರ, ದಾದಿಯರ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.