ಹಂದಿಗೆ ಸ್ಕೂಟಿ ಢಿಕ್ಕಿ: ಸವಾರ ಮೃತ್ಯು

Update: 2020-04-06 16:02 GMT

ಬೈಂದೂರು, ಎ.6: ಹಂದಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಎ.6ರಂದು ಬೆಳಗ್ಗೆ ನಾವುಂದ ಗಣೇಶ ನಗರ ಎಂಬಲ್ಲಿ ನಡೆದಿದೆ.

ಮೃತರನ್ನು ನಾವುಂದ ಗ್ರಾಮದ ಸಂತೋಷ ಪೂಜಾರಿ ಎಂದು ಗುರುತಿಸ ಲಾಗಿದೆ. ಕೋಯಾ ನಗರದ ಕಡೆಯಿಂದ ಅರೆಹೊಳೆ ಬೈಪಾಸ್ ಕಡೆಗೆ ಹೋಗು ತ್ತಿದ್ದ ಸ್ಕೂಟಿ, ಒಮ್ಮೆಲೇ ರಸ್ತೆಗೆ ಅಡ್ಡ ಬಂದ ಹಂದಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸವಾರ ಸಂತೋಷ ಪೂಜಾರಿ ಸ್ಕೂಟಿ ಸಮೇತ ರಸ್ತೆಗೆ ಬಿದ್ದರು. ಗಂಭೀರವಾಗಿ ಗಾಯಗೊಂಡ ಇವರು, ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News