ಹಸಿವಿನಿಂದ ಕಾರ್ಮಿಕ ಮಹಿಳೆ ಸಾವು: ಪರಿಹಾರಕ್ಕೆ ಆಗ್ರಹ
Update: 2020-04-07 16:37 GMT
ಉಡುಪಿ, ಎ.7: ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ನೂರಾರು ಕಿ.ಮೀ ನಡೆದು ಹಸಿವಿನಿಂದ ಸಾವನಪ್ಪಲು ಕೇಂದ್ರ ಮತ್ತು ರಾಜ್ಯ ಸರಕಾರದ ಬೇಜವಾಬ್ದಾರಿತನಗಳೇ ಕಾರಣವೆಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಳ ಸಮನ್ವಯ ಸಮಿತಿ ಆರೋಪಿಸಿದೆ.
ಸರಕಾರ ಕೂಡಲೇ ರಾಯಚೂರು ಜಿಲ್ಲಾಧಿಕಾರಿಯನ್ನು ಆ ನತದೃಷ್ಟ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನವನ್ನು ಹೇಳಲು ಕಳಿಸಬೇಕು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರಕುವ 5 ಲಕ್ಷದ ಪರಿಹಾರದ ಜೊತೆಗೆ ರಾಜ್ಯ ಸರಕಾರವೂ 10 ಲಕ್ಷ ಪರಿಹಾರ ಘೋಷಿಸಿ ಒಟ್ಟು 15 ಲಕ್ಷ ಪರಿಹಾರವನ್ನು ಗಂಗಮ್ಮಳ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ್ ಹಾಗೂ ಶೇಖರ್ ಬಂಗೇರ ರಾಜ್ಯ ಸರಕಾರವನ್ನು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.