ಇಸ್ಪೀಟ್ ಜುಗಾರಿ: ಐವರ ಬಂಧನ

Update: 2020-04-07 16:39 GMT

ಗಂಗೊಳ್ಳಿ, ಎ.7: ಮರವಂತೆ ಗಾಂಧಿನಗರ ಎಂಬಲ್ಲಿರುವ ಹಾಡಿಯಲ್ಲಿ ಎ.6ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸ್ಥಳೀಯರಾದ ದೀಪಕ್ ಖಾರ್ವಿ, ರಾಘವ ಖಾರ್ವಿ, ವೆಂಕಟೇಶ ಖಾರ್ವಿ, ರಂಜಿತ್ ಖಾರ್ವಿ, ಮಂಜುನಾಥ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

 ಇವರಿಂದ ಎರಡು ದ್ವಿಚಕ್ರ ವಾಹನಗಳು ಹಾಗೂ ನಗದನ್ನು ವಶಪಡಿಸಿಕೊಳ್ಳ ಲಾಗಿದೆ. ಇವರ ವಿರುದ್ಧ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ, ಮುಂಗೃತಾ ಕ್ರಮದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷತನವನ್ನು ತೋರಿಸಿ, ಸಾರ್ವಜನಿಕ ಸ್ಥಳದಲ್ಲಿ ಗುಂಪು ಕೂಡಿ ಕುಳಿತಿರುವ ಬಗ್ಗೆಯೂ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News