ರೈಲು ಢಿಕ್ಕಿ: 9 ಜಾನುವಾರು ಸಾವು

Update: 2020-04-09 15:43 GMT

ಬೈಂದೂರು, ಎ.9: ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಒಂಭತ್ತು ಜಾನುವಾರುಗಳು ಮೃತಪಟ್ಟ ಘಟನೆ ಎ.8ರಂದು ಸಂಜೆ ವೇಳೆ ಬಿಜೂರು ರೈಲ್ವೆ ಗೇಟ್ ಬಳಿ ನಡೆದಿದೆ.

ಗೋವಾದಿಂದ ಮಂಗಳೂರು ಕಡೆ ಚಲಿಸುತ್ತಿದ್ದ ರೈಲು, ಹಳಿ ಮೇಲೆ ಸಾಗು ತ್ತಿದ್ದ ಜಾನುವಾರುಗಳಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಎಂಟು ಗಂಡು ಹಾಗೂ ಒಂದು ಹೆಣ್ಣು ಜಾನುವಾರು ಸ್ಥಳದಲ್ಲೇ ಸಾವನ್ನಪ್ಪಿತ್ತೆಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಜಾನುವಾರುಗಳು 100 ಮೀಟರ್ ದೂರ, ದೇಹ ಗಳು ಛಿದ್ರಗೊಂಡು ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News