ಪೊಲೀಸರ ವಿನಾಕಾರಣ ದಬ್ಬಾಳಿಕೆ ವಿರುದ್ಧ ಹೋರಾಟ: ಯಶ್ಪಾಲ್

Update: 2020-04-09 15:43 GMT

ಉಡುಪಿ, ಎ.9: ಸಮಾಜಘಾತುಕರ ವಿರುದ್ಧ ಯಾವ ಸರಕಾರವಿದ್ದರೂ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆ ಯಲ್ಲಿ ಪೊಲೀಸರು ವಿನಾಕಾರಣ ಪೂರ್ವಗ್ರಹ ಪೀಡಿತರಾಗಿ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಕಾರ್ಯಕರ್ತರ ಜೊತೆ ನಿಲ್ಲಲು ನಾನು ಸಿದ್ಧ ಎಂದು ಬಿಜೆಪಿ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

ಇಡೀ ದೇಶವೇ ಕರೋನ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದರೆ ಒಂದು ವರ್ಗದ ಜನರು ಮಾತ್ರ ಸರಕಾರದ ಜೊತೆ ಅಸಹಕಾರ ತೋರುತ್ತಿರುವುದರ ಬಗ್ಗೆ ನಮಗೆ ಆಕ್ರೋಶವಿದೆ. ಕರಾವಳಿ ಹಿಂದುತ್ವದ ಭದ್ರನೆಲೆ ರಾಜಕೀಯಕ್ಕಾಗಿ ಹಿಂದುತ್ವದ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News