ಕಳ್ಳಭಟ್ಟಿ ಘಟಕಕ್ಕೆ ಅಬಕಾರಿ ಇಲಾಖೆ ದಾಳಿ

Update: 2020-04-09 16:39 GMT

ಮಂಗಳೂರು, ಎ.9: ನಗರದ ಜಪ್ಪಿನಮೊಗರು ಗ್ರಾಮದ ನ್ಯೂ ಪಡ್ಪುಎಂಬಲ್ಲಿ ರಿಚರ್ಡ್ ಡಿಸೋಜ ಎಂಬವರ ಮನೆಯ ವಠಾರಕ್ಕೆ ಬುಧವಾರ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭ ಮೂರುವರೆ ಲೀಟರ್ ಕಳ್ಳಭಟ್ಟಿ ಮತ್ತು ತಯಾರಿಕಾ ಸಾಮಗ್ರಿಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ದ.ಕ.ಜಿಲ್ಲಾ ಅಬಕಾರಿ ಡಿಸಿ ಶೈಲಜಾ ಕೋಟೆ, ಡಿವೈಎಸ್ಪಿ ಶಿವಪ್ರಸಾದ್‌ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಲಯ 2ರ ಅಬಕಾರಿ ಇನ್‌ಸ್ಪೆಕ್ಟರ್ ರತ್ನಾಕರ ರೈಯ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕ ಆಶಿಸ್, ಸಿಬ್ಬಂದಿ ಬಸವರಾಜತೋರೆ, ನವೀನ್ ನಾಯ್ಕ್ ಮತ್ತು ಚಾಲಕ ಹರಿಯಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News