ಗಾಂಜಾ ಅಡ್ಡಗೆ ದಾಳಿ: ಮೂವರ ಬಂಧನ

Update: 2020-04-09 17:06 GMT

ಬಂಟ್ವಾಳ, ಎ.9: ಗುಡ್ಡ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ನಾಲ್ವರು ಆರೋಪಿಗಳ ಸಹಿತ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪಲ್ಲಮಜಲು ನಿವಾಸಿಗಳಾದ ಅಲ್ತಾಫ್ (24), ಅಬ್ದುಲ್ ರಝಾಖ್ (28), ಸಲ್ಮಾನ್(26), ಮೂಡುನಡುಗೋಡು ನಿವಾಸಿ ಪ್ರೀತಮ್ ರೋಲ್ಸನ್ ಮೇನೆಜಸ್ ಬಂಧಿತ ಆರೋಪಿಗಳು.

ತಾಲೂಕಿನ ಪಲ್ಲಮಜಲು‌ ಎಂಬಲ್ಲಿನ ಗುಡ್ಡ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪಿಎಸ್ಸೈ ಕುಮಾರ್ ಕಾಂಬ್ಳೆ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ‌ ನಡೆಸಿದ್ದು ನಾಲ್ವರು ಆರೋಪಿಗಳ ಸಹಿತ 150 ಗ್ರಾಂ ಗಾಂಜಾ, ಒಂದು ಆಟೋ‌ ರಿಕ್ಷಾ, ಒಂದು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. 

ಬಂಟ್ವಾಳ ನಗರ ಪಿಎಸ್ಸೈ ಅವಿನಾಶ್ ಎಚ್. ಗೌಡ ಪ್ರಕರಣವನ್ನು ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ‌ ನಗರ ಠಾಣಾ ಅಪರಾಧ ಪಿಎಸ್ಸೈ ಸಂತೋಪ್ ಕುಮಾರ್, ಎಚ್.ಸಿ.ಮುರುಗೇಶ್, ಅಪರಾಧ ಪತ್ತೆ ದಳದ ಸಿಬ್ಬಂದಿಯಾದ ಬಸಪ್ಪ, ಕುಮಾರ್, ವಿವೇಕ್, ರಂಗನಾಥ್, ಕೇದಾರ್ ಹಾಗೂ ಶ್ರೀಕಾಂತ್ ರವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News