×
Ad

ಕೋಟೆಕಾರ್ : ನಿರಾಶ್ರಿತರಿಗೆ ಕಿಟ್ ವಿತರಣೆ

Update: 2020-04-13 22:53 IST

ಮಂಗಳೂರು, ಎ.13: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ 15 ಮತ್ತು 16 ಹಾಗೂ 17ನೇ ವಾರ್ಡಿನಲ್ಲಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಮತ್ತು ಕೆಲಸವಿಲ್ಲದೆ ಊರಿಗೆ ಹೋಗಲು ಸಾಧ್ಯವಿಲ್ಲದೆ ಇದ್ದ 12 ಮಂದಿ ನಿರಾಶ್ರಿತರಿಗೆ ಶಾಸಕ ಯು.ಟಿ.ಖಾದರ್ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮಾಲ್ ಅಜ್ಜಿನಡ್ಕ, ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಮೊಯಿದಿನ್ ಬಾವ ಕೊಮರಂಗಳ, ಪುಷ್ಠಿ ಮುಹಮ್ಮದ್, ಲ್ಯಾನ್ಸಿ ಡಿಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಬಾತಿಷ್ ಸುಲೈಮಾನ್, ಕಾಂಗ್ರೆಸ್ ಪ್ರಮುಖರಾದ ಪುರುಷ, ಕೋಟೆಕಾರ್ ಇಬ್ರಾಹಿಂ, ಮುಳ್ಳುಗುಡ್ಡೆ ಬಶೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News